Slide
Slide
Slide
previous arrow
next arrow

ಸ್ಥಳೀಯರಿಗೆ ಬುದ್ಧಿವಾದ ಹೇಳಿ ಗಲಾಟೆ ತಪ್ಪಿಸಿದ ಶಾಸಕ ದಿನಕರ ಶೆಟ್ಟಿ

300x250 AD

ಗೋಕರ್ಣ: ಅಜಾಗರೂಕತೆಯಿಂದ ಬೈಕ ಚಲಾಯಿಕೊಂಡು ಬಂದು ಬಿದ್ದ ಬೈಕ್ ಸವಾರರು ಹಿಂಬದಿಯಿ0ದ ಬರುತ್ತಿದ್ದ ಪ್ರವಾಸಿ ವಾಹನವನ್ನು ತಡೆದು ನೀವೇ ಈ ಅವಘಡಕ್ಕೆ ಕಾರಣ ಎಂದು ತಗಾದೆ ತೆಗೆದು ಗಲಾಟೆ ಮಾಡುತ್ತಿದ್ದ ವೇಳೆ ವಿನಾಕಾರಣ ಪ್ರವಾಸಿಗರಿಗೆ ತೊಂದರೆ ನೀಡದಂತೆ ಸ್ಥಳೀಯ ಬೈಕ ಸವಾರರಿಗೆ ಶಾಸಕ ದಿನಕರ ಶೆಟ್ಟಿ ತಿಳಿಹೇಳಿ ಪ್ರವಾಸಿಗರಿಗೆ ನೆರವಾದ ಘಟನೆ ನಡೆದಿದೆ.

ಗೋಕರ್ಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಮಟಾದಿಂದ ಬರುತ್ತಿರುವ ವೇಳೆ ಈ ಘಟನೆ ನಡೆದಿದೆ. ಇವರ ಮುಂದೆ ಸಾಗುತ್ತಿದ್ದ ಬೈಕನವರು ಪ್ರವಾಸಿಗರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಯಾವುದೇ ತಪ್ಪಿಲ್ಲದಿದ್ದರೂ ಪ್ರವಾಸಿಗರನ್ನು ಬೈಯ್ದು ಗಲಾಟೆ ಮಾಡುತ್ತಿದ್ದನ್ನು ಗಮನಿಸಿದ ಶಾಸಕರು ತಮ್ಮ ವಾಹನ ನಿಲ್ಲಿಸಿ ಕೂಡಲೇ ಕೆಳಗಿಳಿದು ಧಾವಿಸಿ, ಪ್ರವಾಸಿಗರಿಗೆ ತೊಂದರೆ ನೀಡಿದರೆ ನಮ್ಮ ಊರಿಗೆ ಕೆಟ್ಟ ಹೆಸರು ಬರುತ್ತದೆ.

300x250 AD

ಈ ರೀತಿ ಮಾಡಬೇಡಿ ಎಂದು ಬುದ್ಧಿವಾದ ಹೇಳಿದ್ದಾರೆ. ಅಲ್ಲದೆ ಯಾವುದೇ ತಪ್ಪು ಇಲ್ಲದೆ ಈ ರೀತಿ ಪ್ರವಾಸಿಗರ ದೂಷಣೆ ಮಾಡಿದರೆ ಪ್ರವಾಸಿ ತಾಣದ ಹೆಸರು ಹಾಳು ಮಾಡಿದಂತೆ ಎಂದು ತಿಳಿಸಿ ಪ್ರವಾಸಿಗರು ಮುಂದೆ ತೆರಳಲು ಅನುವು ಮಾಡಿಕೊಟ್ಟರು.

Share This
300x250 AD
300x250 AD
300x250 AD
Back to top